ಬಾಲಕೃಷ್ಣ ರೈ ಪೊರ್ದಾಲ್
ಶತಮಾನದ ಹೊಸ್ತಿಲಲ್ಲಿರುವ ಲಿಟ್ಲ್ ಫ್ಲವರ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇಲ್ಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ದಿನಾಂಕ 03-06-2025 ರಂದು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು. ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ದೀಪ ಪ್ರಜ್ವಲಿಸಿ ಮಾತನಾಡಿ ಲಿಟ್ಲ್ ಫ್ಲವರ್ ಶಾಲೆಯ ಮಕ್ಕಳು ಬಿಗ್ ಫ್ಲವರ್ ಗಳು ರಾಷ್ಟ್ರ ಮಟ್ಟದ ವರೆಗೆ ತನ್ನ ಛಾಪ ನ್ನು ಮೂಡಿಸಿದ್ದಾರೆ. ಇಲ್ಲಿನ ಮಕ್ಕಳ ಶಿಸ್ತು ಅದ್ಭುತ, ಹಿರಿಯರಿಗೆ ಕೊಡೊ ಗೌರವ ಇನ್ನೂ ಚಂದ,ಇತರ ಶಾಲೆಗೆ ಅನುಕರಣೀಯ, ಮುಂದಿನ ಶೈಕ್ಷಣಿಕ ವರ್ಷದಲ್ಲೂ ಗತವರ್ಷದ ಸಾಧನೆ ಮುಂದುವರಿಯಲಿ ಎಂದು ಶುಭಹಾರೈಸಿದರು.ಪಠ್ಯ ಪುಸ್ತಕ ವಿತರಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಪುತ್ತೂರು ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀ ಆಂಜನೇಯ ರೆಡ್ಡಿ ಪುತ್ತೂರಿನ ಸಣ್ಣ ಊರಿನ ಲಿಟ್ಲ್ ಫ್ಲವರ್ ಶಾಲೆಯ ಮಕ್ಕಳು ಇವತ್ತು ದೇಶದಲ್ಲಿ ಗುರುತಿಸಿದ್ದಾರೆ ಅಂದರೆ ಇಲ್ಲಿನ ಶಿಕ್ಷಕರ ಶ್ರಮ, ವಿದ್ಯಾರ್ಥಿಗಳ ಕಾರ್ಯವೈಖರಿ ಮೆಚ್ಚುವಂತಹದು. ಇಲ್ಲಿನ ವಾತಾವರಣವೇ ನಮ್ಮನ್ನು ಪದೇ ಪದೇ ಈ ಶಾಲೆಗೆ ಬರುವಂತೆ ಮಾಡುತ್ತದೆ ಶೈಕ್ಷಣಿಕ ವರ್ಷ ಇನ್ನಷ್ಟು ಹರ್ಷ ತರಲಿ ಎಂದರು.ಹಿರಿಯ ವಿದ್ಯಾರ್ಥಿ, ಉದ್ಯಮಿ, ಕೊಡುಗೈ ದಾನಿ ಬಿ ಜಿ ಜುನೈದ್ ಮಾಲಕರು ಬಿ ಜಿ ಕನ್ಸ್ಟ್ರಕ್ಷನ್ ಪುತ್ತೂರು ಮಾತನಾಡಿ ಬಡತನದಲ್ಲಿ ಇದ್ದಾಗ ಅನ್ನ ಕೊಟ್ಟ ಶಾಲೆ, ನೆಮ್ಮದಿಗಾಗಿ ಓಡೋಡಿ ಬರುತಿದ್ದ ಶಾಲೆ, ಲಾಸ್ಟ್ ಬೆಂಚಿನ ಮಕ್ಕಳನ್ನು ಪ್ರೀತಿಸಿದ ಶಾಲೆ ಇದು ಯಾವತ್ತಿಗೂ ಮರೆಯದ ಶಾಲೆ ಎಂದರು.ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ರಾಮಚಂದ್ರ ಭಟ್ ರವರು ಮಾತನಾಡಿ ಕಳೆದ 9 ವರ್ಷದಿಂದ ಈ ಶಾಲೆಯ ಜೊತೆಗಿನ ಒಡನಾಟ,ಶಾಲೆಯ ಪ್ರತಿ ಕಾರ್ಯಕ್ರಮದಲ್ಲಿ ಒಟ್ಟಿಗೆ ಸೇರಿ ದುಡಿದ ಅನುಭವ ಸ್ಮರಣೀಯ ಹಾಗೂ ವರ್ಗಾವಣೆ ಗೊಳ್ಳುತ್ತಿರುವ ಮೃದು ಸ್ವಭಾವದ ಮುಖ್ಯ ಶಿಕ್ಷಕಿ ವೆನಿಶಾ ಬಿ ಎಸ್ ಸಹಕಾರಕ್ಕೆ ಧನ್ಯವಾದಗಳು ಎಂದರು. ವೇದಿಕೆ ಯಲ್ಲಿ ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ ಸ್ಥಾಪಕ ಅಧ್ಯಕ್ಷರು, ತಾಲೂಕ್ ರಾಜ್ಯೋತ್ಸವದ ಪ್ರಶಸ್ತಿ ವಿಜೇತರಾದ ರಝಕ್ ಬಪ್ಪಳಿಗೆ, ಹಿರಿಯ ವಿದ್ಯಾರ್ಥಿ ಕೋಸ್ಟಲ್ ಹೋಮ್ ಮಾಲಕರಾದ ಸಂದೇಶ್ ರೈ ಹಾಗೂ ನಿವೃತ್ತ ಶಿಕ್ಷಕಿ ಭಗಿನಿ ಡೈನ ಮೇರಿ ಸಿಕ್ತ್ವೆರಾ ಉಪಸ್ಥಿತರಿದ್ದರು.
ಪುತ್ತೂರು ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀ ಆಂಜನೇಯ ರೆಡ್ಡಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ರಸ ಪ್ರಶ್ನೆ ಕೇಳಿ ಬಹುಮಾನ ನೀಡಿ ಅಭಿನಂದಿಸಿದರು. ವರ್ಗಾವಣೆ ಗೊಳ್ಳುತ್ತಿರುವ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ರವರನ್ನು ಸನ್ಮಾನಿಸಲಾಯಿತು. ಶಾಲಾ ಹಿರಿಯ ಶಿಕ್ಷಕಿ ವಿಲ್ಮಾ ಫೆರ್ನಾಂಡಿಸ್ ಸ್ವಾಗತಿಸಿ, ಶಿಕ್ಷಕಿ ದಿವ್ಯ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ನಿರೂಪಿಸಿದರು. ಎಲ್ಲಾ ಶಿಕ್ಷಕಿಯರು ಸಹಕರಿಸಿದರು.
